(www.vknewa.in)ಸುನ್ನೀ ದಅವಾ ವಿಂಗ್ ಕಲ್ಲುಗುಂಡಿ ವತಿಯಿಂದ ಮಾಸಿಕವಾಗಿ ನಡೆಸಿಕೊಂಡು ಬರುತ್ತಿರುವ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ದಿನಾಂಕ 26-08-2022 ರಂದು ಕಲ್ಲುಗುಂಡಿಯ ಬಾಲಂಬಿ ಯಲ್ಲಿರುವ ಅಲೀ ಯವರ ನಿವಾಸದಲ್ಲಿ ಜರಗಿತು. ಮುಖ್ಯ ಭಾಷಣಗಾರರಾಗಿ ಆಗಮಿಸಿದ ಪ್ರಭಾಷಣ ಲೋಕದ ಮಿನುಗು ತಾರೆ ಬಹು ರಫೀಕ್ ಸಅದಿ ದೇಲಂಪಾಡಿ ಯವರು ಆತ್ಮೀಯ ಉಪದೇಶಗಳನ್ನು ನೀಡಿ ಎಲ್ಲರನ್ನೂ ಪುಳಕಿತಗೊಳಿಸಿದರು. ಮಹ್ಳರತುಲ್ ಬದ್ರಿಯಾ ಮಜ್ಲಿಸ್ ಗೆ ಬಶೀರ್ ಸಖಾಫಿ ಮೊಗರ್ಪಣೆ ನೇತೃತ್ವ ವಹಿಸಿದರು. ಪ್ರಮುಖ ವಿಧ್ವಾಂಸರಾದ ಬಹು ಇಸ್ಮಾಯಿಲ್ ಮುಸ್ಲಿಯಾರ್ ಸಜಿಪ ರವರು ಸಮಾರೋಪ ದುಆಃ ಗೆ ನೇತೃತ್ವ ನೀಡಿದರು. ಕಾರ್ಯಕ್ರಮದಲ್ಲಿ ಎಸ್ವೈಎಸ್ ಸುಳ್ಯ ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಸುಣ್ಣಮೂಲೆ, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷರಾದ ಅಬ್ದುರ್ರಹ್ಮಾನ್ ಮೊಗರ್ಪಣೆ, ಗ್ರಾಮ ಪಂಚಾಯತ್ ಸದಸ್ಯರಾದ ಅಬೂಸ್ವಾಲಿಹ್ ಗೂನಡ್ಕ, ಎಸ್ಸೆಸ್ಸಫ್ ಅಧ್ಯಕ್ಷರಾದ ರಂಶಾದ್, ಎಸ್ವೈಎಸ್ ಅಧ್ಯಕ್ಷರಾದ ಅಬ್ದುಲ್ಲತೀಫ್ ಮುಸ್ಲಿಯಾರ್ ಕೊಯನಾಡು ಹಾಗೂ ಪ್ರಮುಖ ಸಂಘಟನಾ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿದರು. ಊರಿನ ಹಾಗೂ ಪರಿಸರದ ಹಲವಾರು ಉಮರಾ ಪ್ರಮುಖರು ಭಾಗವಹಿಸಿದರು. ಎ.ಎಂ.ಫೈಝಲ್ ಝುಹ್ರಿ ಸ್ವಾಗತಿಸಿ ವಂದಿಸಿದರು. ಸ್ವಾದಿಕ್ ಮಾಸ್ಟರ್ ಕಾರ್ಯಕ್ರಮವನ್ನು ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.