ಜಿದ್ದಾ(www.vknews.in): ಮಕ್ಕಾ ಪ್ರಾಂತೀಯ ಡೆಪ್ಯುಟಿ ಅಮಿರ್ ಮತ್ತು ಕೇಂದ್ರ ಹಜ್ ಸಮಿತಿಯ ಉಪಾಧ್ಯಕ್ಷ ರಾಜಕುಮಾರ ಸೌದ್ ಬಿನ್ ಮಿಶಾಲ್ ಅವರು ಪರವಾನಗಿ ಇಲ್ಲದೆ ಹಜ್ಗೆ ಅವಕಾಶ ನೀಡುವುದಿಲ್ಲ ಎಂದು ಒತ್ತಿ ಹೇಳಿದರು. ಸೂಚನೆಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ರಾಜಕುಮಾರ ಹೇಳಿದರು.
“ಅನುಮತಿ ಇಲ್ಲದೆ ಹಜ್ ಇಲ್ಲ” ಎಂಬ ಘೋಷಣೆಯಡಿಯಲ್ಲಿ “ಹಜ್ ಒಂದು ರೀತಿಯ ಆರಾಧನೆ ಮತ್ತು ಸುಸಂಸ್ಕೃತ ನಡವಳಿಕೆ” ಎಂಬ ಅಭಿಯಾನವನ್ನು ರಾಜಕುಮಾರ ಉದ್ಘಾಟಿಸಿದರು.
ಈ ರೀತಿಯ ಅಭಿಯಾನಗಳು ಇಸ್ಲಾಂನ ಐದನೇ ಸ್ತಂಭವನ್ನು ಸುಲಭವಾಗಿ ಮತ್ತು ಆರಾಮವಾಗಿ ನಿರ್ವಹಿಸಲು ಹಜ್ಜಾಜ್ ಗಳಿಗೆ ಸೂಕ್ತವಾದ ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸಲಿದೆ ಎಂದು ರಾಜಕುಮಾರ ಹೇಳಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.