ಪರಿವೇ ಇಲ್ಲದವರ ಮೇಲೆ ನಿನ್ನ ಪ್ರಲಾಪ ಪ್ರಶಾಂತ . ಬಲ್ಲವರು ಬಹಳಿಲ್ಲ ನಿನ್ನರೂಪ, ಇರುವೆ ನೀ ಜತೆಗೇ ಮಾಯಾವಿ…
ಎಲ್ಲೆಂದರಲ್ಲಿ ಇನಿಯನಂತೆ ಸನಿಹ- ನಿನ್ನ ಬಾಳ ಪಯಣ ನಮ್ಮೊಟ್ಟಿಗೆ. ಬರುವೆ ನೀ ಎಲ್ಲಿ ನಾವು ಹೋದರಲ್ಲಿ ನೆರಳಿನಂತೆ ಇರುವೆ ಜತೆ-ಜತೆಯಲ್ಲೇ…
ಲೆಕ್ಕ ಚುಕ್ತವಾಯಿತೋ ಆ ಕ್ಷಣಮಾತ್ರದಲ್ಲೇ ನಿನ್ನ ಕರೆ ನಿರ್ದಯಿ ಮುಲಾಜಿಲ್ಲದೆ ಓಗೊಡಲೇ ಬೇಕು’ಇಲ್ಲ’ಎನ್ನುವ ಅಹಂನ ಮರುಮಾತಿಲ್ಲದೆ…
ಎಲ್ಲ ಗೊಡವೆಗಳ ಪಕ್ಕಕ್ಕಿಟ್ಟು, ನಿನ್ನೊಂದಿಗೆ ಪಯಣ ಸದ್ದಿಲ್ಲದೆ ಸದ್ದುಗದ್ದಲವೆಲ್ಲ ಹೊರಗೆ ಅಳು ರೋಧನ ಹೂಹಾರ ಇಂತೀ ವೇಷ ಪರಿವಾರ….
ಮಂಜುಳಾ ಶಿವಶಂಕರ್ ಆಂಗ್ಲಭಾಷಾ ಶಿಕ್ಷಕರು, ಜೆ.ಎಸ್.ಎಸ್ ಪಬ್ಲಿಕ್ ಶಾಲೆ, ಮಾಲೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.