ಸುಳ್ಯ (ವಿಶ್ವ ಕನ್ನಡಿಗ ನ್ಯೂಸ್) : ಹೆತ್ತ ತಾಯಿಯೇ ತನ್ನ ಹತ್ತು ದಿನದ ಮಗುವನ್ನು ಬಾವಿಗೆ ಎಸೆದು ಕೊ೦ದು ಹಾಕಿದ ಹೃದಯ ವಿದ್ರಾಯಕ ಘಟನೆ ತಾಲೂಕಿನ ಪ೦ಜ ಸಮೀಪದ ಕೂತ್ಕು೦ಜ ಗ್ರಾಮದ ಬಸ್ತಿಕಾಡು ಎ೦ಬಲ್ಲಿ ನಡೆದಿದೆ. ತನ್ನ ಮಗುವನ್ನು ಬಾವಿಗೆ ಎಸೆದ ತಾಯಿ ಪವಿತ್ರ ಎ೦ದು ಗುರುತಿಸಲಾಗಿದೆ.
ಪವಿತ್ರ ಅವರು ಕಳೆದ ಕೆಲವು ಸಮಯಗಳಿ೦ದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಇತ್ತೀಚೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಎಂದು ಹೇಳಲಾಗುತ್ತಿದೆ. ಶನಿವಾರ ಸಾಯಂಕಾಲ ಮನೆಯಲ್ಲಿ ಯಾರು ಇಲ್ಲದ ವೇಳೆ ಮಗುವನ್ನು ತಮ್ಮ ಮನೆಯ ಪಕ್ಕದಲ್ಲಿರುವ ಬಾವಿಗೆ ಎಸೆಯಲಾಗಿದೆ. ಘಟನೆಯ ಮಾಹಿತಿ ತಿಳಿದ ಸುಬ್ರಹ್ಮಣ್ಯ ಪೊಲೀಸರು ಸ್ವಳಕ್ಕೆ ಆಗಮಿಸಿ, ಮಗುವಿನ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.